ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜನವರಿ 12 , 2014
|
ಜನವರಿ 14, 2014
|
ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆಗೆ ಸನ್ಮಾನ
ಶಿರಸಿ :
ಯಕ್ಷಗಾನ ಶ್ರೇಷ್ಠ ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆಗೆ ನೃತ್ಯಪುರಂ, ಖ್ಯಾತ ಹಿಂದುಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ್ಗೆ ರಾಗರತ್ನ, ಕಾರ್ಯಕ್ರಮ ಸಂಘಟಕ ರಘುಪತಿ ಭಟ್ಟ ಸುಗಾವಿಗೆ ಮಿತ್ರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ನಗರದ ನಯನ ಸಭಾಂಗಣದಲ್ಲಿ ನಡೆಯಿತು.
ಸ್ಥಳೀಯ ರಾಗಮಿತ್ರ ಪ್ರತಿಷ್ಠಾನದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಲಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ನೆರವೇರಿಸಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿವಿ, ಮೊಬೈಲ್ ಯುಗದಲ್ಲೂ ಮಕ್ಕಳನ್ನು ಭಾರತೀಯ ಸಂಸ್ಕೃತಿ, ಪರಂಪರೆಯ ಮುಂದುವರಿಕೆಗೆ ನೆರವಾಗುವ ಸಂಗೀತದ ಆರಾಧನೆಯ ಶಾಲೆ ಮಿತ್ರಾ ಮ್ಯೂಸಿಕಲ್ನಂತಹ ಸಂಸ್ಥೆಗೆ ಸೇರಿಸುವುದು ಶ್ರೇಷ್ಠ ಎಂದು ಕಾರ್ಯವನ್ನು ಶ್ಲಾಘಿಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಂಡಿತ್ ಎಂ.ಪಿ. ಹೆಗಡೆ ಪಡಿಗೇರಿ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಯ ಎತ್ತರಕ್ಕೇರಲು ಸಹನೆ, ಸಾಧನೆ ಬೇಕು ಎಂದರು.
ವೈದ್ಯ ಶಿವರಾಮ ಕೆ.ವಿ., ವಿದ್ವಾನ್ ಪ್ರಕಾಶ ಹೆಗಡೆ ಯಡಹಳ್ಳಿ ಇತರರು ಇದ್ದರು. ಪ್ರಕಾಶ ಭಾಗವತ್ ನಿರ್ವಹಿಸಿದರು.
ಬಳಿಕ ಬೆಂಗಳೂರಿನ ಅಪರ್ಣಾ ಭಟ್ಟ, ಅಶೋಕ ಹುಗ್ಗಣ್ಣವರ್ ಅವರಿಂದ ಗಾಯನ, 2ನೇ ವರ್ಗದ ಪೋರ ಹೇಮಂತ ಜೋಶಿ ಅವರಿಂದ ತಬಲಾ ಸೋಲೋ ನಡೆಯಿತು. ಇದಕ್ಕೂ ಮುನ್ನ ನಡೆದ ಮಿತ್ರಾ ಮ್ಯೂಸಿಕಲ್ಸನ ವಿದ್ಯಾರ್ಥಿಗಳ ಸಂಗೀತ ಸೌರಭದಲ್ಲಿ ಅಲ್ಲಮ ಪ್ರಭು, ಎಂ.ಜಿ.ಭಟ್ಟ ನೆಬ್ಬೂರು, ಕಿರಣ ಕಾನಗೋಡ, ಸುಧಾಕರ ನಾಯ್ಕ, ಭರತ್ ಹೆಗಡೆ, ಪ್ರಕಾಶ ಹೆಗಡೆ ಇತರರು ಸಹಕಾರ ನೀಡಿದರು.
ಕೃಪೆ :
http://kannada.yahoo.com
|
|
|